ಉದಯ ಟಿವಿಯಲ್ಲಿ ಪ್ರಸಾರವಾಗುವ ಸವಾಲ್ ಗೆ ಸೈ ಕಾರ್ಯಕ್ರಮ ಚೆನೈನಲ್ಲಿ ಚಿತ್ರೀಕರಣಗೊಂಡಿತು. ಕಾರ್ಯಕ್ರಮದಲ್ಲಿ ಟಕ್ಕರ್ ತಂಡ ಮತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಭಾಗವಹಿಸಿದ್ದರು.

ಟಕ್ಕರ್ ಟೀಮಿನಿಂದ ನಿರ್ಮಾಪಕ ನಾಗೇಶ್ ಕೋಗಿಲು, ನಾಯಕ ನಟ ಮನೋಜ್ ಕುಮಾರ್, ನಾಯಕಿ ರಂಜನಿ ರಾಘವನ್, ನಿರ್ದೇಶಕ ರಘುಶಾಸ್ತ್ರಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಕ್ಕರ್ ಟೀಮ್ ಸವಾಲ್ ಹಾಕಿತ್ತು.

ಎರಡು ತಂಡಗಳಲ್ಲಿ ಅಂತಿಮವಾಗಿ ವಿಜಯಿಯಾದ ತಂಡ ಯಾವುದು ಅನ್ನೋದನ್ನು ತಿಳಿಯೋದಕ್ಕೆ ಕಿರುತೆರೆಯಲ್ಲಿ ಪ್ರಸಾರವಾಗುವವರೆಗೂ ಕಾಯಲೇಬೇಕು…. ಈ ಸಂಚಿಕೆ ಶೀಘ್ರದಲ್ಲಿಯೇ ಪ್ರಸಾರವಾಗಲಿದೆ….











































