ಅನುಕ್ತದಲ್ಲೂ ಇದೆಯಾ ಗುಡ್ಡದ ಭೂತ?

Picture of Cinibuzz

Cinibuzz

Bureau Report


ಹರೀಶ್ ಬಂಗೇರಾ ನಿರ್ಮಾಣದ ಅನುಕ್ತ ಬಿಡುಗಡೆಗೆ ಕ್ಷಣ ಗಣನೆ ಶುರುವಾಗಿದೆ. ಚಿತ್ರವೊಂದರ ಯಶಸ್ಸಿಗೆ ಏನೇನು ವಾತಾವರಣವಿರಬೇಕೋ ಅದೆಲ್ಲವಕ್ಕೂ ಕೂಡಾ ಅನುಕ್ತ ರೂವಾರಿಯಾಗಿದೆ. ಚಿತ್ರತಂಡದ ಕಡೆಯಿಂದ ಬರುವ ಸುದ್ದಿಗಳಿಗಿಂತಲೂ, ಪ್ರೇಕ್ಷಕರ ಮನಸಲ್ಲಿಯೇ ಹುಟ್ಟಿಕೊಳ್ಳೋ ಪ್ರಶ್ನೆಗಳೇ ಹೆಚ್ಚು ಪರಿಣಾಮಕಾರಿ. ಈ ದಿಸೆಯಲ್ಲಿ ನೋಡಿದರೆ, ಖಂಡಿತಾ ಅನುಕ್ತ ಯಶದ ಹಾದಿಯಲ್ಲಿದೆ!

ಅನುಕ್ತ ಕ್ರೈಂ ಥ್ರಿಲ್ಲರ್ ಕಥೆ ಹೊಂದಿರೋ ಚಿತ್ರ ಎಂವಬ ವಿಚಾರ ಈಗಾಗಲೇ ಜಾಹೀರಾಗಿದೆ. ಆದರೆ ಈ ಸಿನಿಮಾದೊಳಗೆ ಮತ್ತೂ ಏನೇನಿರಬಹುದೆಂಬ ಪ್ರಶ್ನೆ ಮತ್ತು ನಾನಾ ದಿಕ್ಕುಗಳ ಚರ್ಚೆ ಸದಾ ಚಾಲ್ತಿಯಲ್ಲಿದೆ. ಇದೀಗ ಅನುಕ್ತದಲ್ಲಿ ಹಾರರ್ ಅನುಭವ ಕೂಡಾ ಆಗಲಿದೆಯಾ? ಈ ಚಿತ್ರದಲ್ಲಿಯೂ ತುಳುನಾಡ ಸೀಮೆಯ ಜನರ ನಡುವೆ ಹಾಸುಹೊಕ್ಕಾಗಿರುವ ಗುಡ್ಡದ ಭೂತ ಇದೆಯಾ ಅಂತೆಲ್ಲ ಪ್ರೇಕ್ಷಕರೇ ಕುತೂಹಲಗೊಂಡಿದ್ದಾರೆ. ಆದರೆ ಚಿತ್ರ ತಂಡ ಈ ಬಗೆಗಿನ ಯಾವ ಮಾಹಿತಿಯನ್ನೂ ಕೂಡಾ ಬಿಟ್ಟು ಕೊಟ್ಟಿಲ್ಲ. ಆದರೆ, ಜನ ನಿರೀಕ್ಷೆ ಮಾಡಿರೋದನ್ನು ಮೀರಿದ ವಿಚಾರಗಳು ಅನುಕ್ತದಲ್ಲಿರೋದಂತೂ ಸತ್ಯ!

ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನದ ಈ ಚಿತ್ರವನ್ನು ಹರೀಶ್ ಬಂಗೇರಾ ನಿರ್ಮಾಣ ಮಾಡಿದ್ದಾರೆ. ಕಾರ್ತಿಕ್ ಅತ್ತಾವರ ಮತ್ತು ಸಂಗೀತಾ ಭಟ್ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಅನುಪ್ರಭಾಕರ್, ಉಷಾ ಭಂಡಾರಿ, ಶ್ರೀಧರ್ ಮುಂತಾದವರ ತಾರಾಗಣವಿದೆ. ನೊಬಿನ್ ಪೌಲ್ ಮ್ಯೂಸಿಕ್ ಹಾಗೂ ಮನೋಹರ ಜೋಷಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

#

ಇನ್ನಷ್ಟು ಓದಿರಿ

Scroll to Top