ಬೆಂಗಳೂರು ಚಿತ್ರೋತ್ಸವ: ರೇಸಿನಲ್ಲಿ ಗೆದ್ದ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು!

Picture of Cinibuzz

Cinibuzz

Bureau Report

ಲೋಕೇಂದ್ರ ಸೂರ್ಯ ನಿರ್ದೇಶನ ಮಾಡಿ ನಟಿಸಿರುವ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಅಖಂಡ ಎಪ್ಪತ್ತರಷ್ಟು ಸಿನಿಮಾಗಳ ರೇಸಿನಲ್ಲಿ ಗೆದ್ದು ಕನ್ನಡ ಸಿನಿಮಾ ವಿಭಾಗದ ಸ್ಪರ್ಧೆಗೆ ಪ್ರವೇಶ ಪಡೆದುಕೊಂಡಿದೆ.

ಈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇಂಡಿಯನ್, ಏಷ್ಯನ್ ಮತ್ತು ಕನ್ನಡ ವಿಭಾಗಳಿರುತ್ತವೆ. ಇದರಲ್ಲಿ ಕನ್ನಡ ವಿಭಾಗದಲ್ಲಿ ಸರಿಸುಮಾರು ಎಪ್ಪತ್ತು ಚಿತ್ರಗಳು ರೇಸಿನಲ್ಲಿದ್ದವು. ಅದರಲ್ಲಿ ಆಯ್ಕಯಾದ ಹದಿನಾರು ಚಿತ್ರಗಳಲ್ಲಿ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಚಿತ್ರವೂ ಸೇರಿಕೊಂಡಿದೆ. ಇದು ಭಿನ್ನ ಕಥಾ ಹಂದರ ಹೊಂದಿರೋ ಈ ಸಿನಿಮಾದ ಆರಂಭಿಕ ಗೆಲುವೆಂಬುದರಲ್ಲಿ ಸಂದೇಹವೇನಿಲ್ಲ.

ಯಾಕೆಂದರೆ ಈ ಚಿತ್ರವನ್ನ ವೀಕ್ಷಿಸಿದ ಜ್ಯೂರಿ ಸದಸ್ಯರೆಲ್ಲ ಖುಷಿಗೊಂಡು ಮೆಚ್ಚಿಕೊಂಡಿದ್ದಾರೆ. ಇದರೊಂದಿಗೆ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಸೂಚನೆಗಳೂ ಸಿಕ್ಕಿವೆ. ಕನ್ನಡದ ಮಟ್ಟಿಗೆ ನವೀನ ಪ್ರಯೋಗದ, ಅಪರೂಪದ ಕಥೆ ಹೊಂದಿರೋ ಈ ಚಿತ್ರ ಬಿಡುಗಡೆಗೆ ತಯಾರಾಗಿದೆ. ಇದು ಜ್ಯೂನಿಯರ್ ಉಪೇಂದ್ರ ಎಂದೇ ಕರೆಸಿಕೊಳ್ಳೋ ಲೋಕೇಂದ್ರ ಸೂರ್ಯ ನಿರ್ದೇಶನದ ಮೊದಲ ಚಿತ್ರ. ನಟನಾಗಿ, ನಿರ್ದೇಶಕನಾಗಿ ಮತ್ತು ಕಥೆಗಾರನಾಗಿ ಅವರೀಗಲೇ ಭರವಸೆ ಹುಟ್ಟಿಸಿದ್ದಾರೆ.

#

ಇನ್ನಷ್ಟು ಓದಿರಿ

Scroll to Top