ಮಹರ್ಷಿ ಸಿನಿಮಾದ ಕಥೆಯನ್ನು ನಿರ್ದೇಶಕ ಶ್ರೀವಾಸ್ ಅವರ ಡಿಕ್ಟೇಟರ್ ಸಿನಿಮಾದಿಂದ ಕದ್ದ ಕಥೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಬಹು ದಿನಗಳ ಹಿಂದೆಯೇ ಶ್ರೀವಾಸ್ ರವರು ಕಥೆಯೊಂದನ್ನು ಬರೆದಿಟ್ಟಿದ್ದರಂತೆ. ಆ ಕಥೆಯು ಇತ್ತೀಚಿಗೆ ರಿಲೀಸ್ ಆಗಿರುವ ಮಹೇಶ್ ಬಾಬು ರವರ ಮಹರ್ಷಿ ಸಿನಿಮಾವನ್ನು ಹೋಲುತ್ತಿದೆಯಂತೆ.

ಸಿನಿಮಾ ನೋಡಿ ಶಾಕ್ ಆದ ಶ್ರೀವಾಸ್ ನಿರ್ಮಾಪಕ ದಿಲ್ ರಾಜು ಅವರನ್ನು ಭೇಟಿಯಾಗಲು ನಿರ್ಧರಿಸಿದರು. ಆನಂತರ ದಿಲ್ ರಾಜು ಮತ್ತು ಶ್ರೀವಾಸ್ ಅನಧಿಕೃತ ಒಪ್ಪಂದಕ್ಕೆ ಒಪ್ಪಿಕೊಂಡು ಆ ತಕರಾರನ್ನು ಬಿಡುವಂತೆ ನಿರ್ಮಾಪಕರು ಶ್ರೀವಾಸ್ ಗೆ ಸೂಚಿಸಿದ್ದಾರೆ ಎನ್ನಲಾಗಿದೆ. ವಂಶಿ ಪೆಡಿಪಲ್ಲಿ ನಿರ್ದೇಶಿಸಿರುವ ಮಹರ್ಷಿ ಸಿನಿಮಾವು ಬಾಕ್ಸ್ ಆಫೀಸ್ ನಲ್ಲಿ ಭಾರಿ ಕಮಾಲು ಮಾಡುತ್ತಿದೆ. ಚಿತ್ರವೂ ಇತ್ತೀಚಿಗೆ ರಿಲೀಸ್ ಆಗಿ ಬಾಕ್ಸ್ ಆಫೀಸಿನಲ್ಲಿ ಸಕತ್ ಕಮಾಯಿ ಮಾಡುತ್ತಿದೆ.











































