ಹಾಟ್ ಎಂಬ ಪದಕ್ಕೆ ಬಿಸಿ ಎಂಬ ಅರ್ಥವಿದೆಯಲ್ಲಾ? ಅದಕ್ಕೆ ಸನ್ನಿ ಲಿಯೋನ್ ಎಂಬ ಹೆಸರು ರಿಪ್ಲೇಸ್ ಆಗಿ ವರ್ಷಾಂತರಗಳೇ ಕಳೆದು ಹೋಗಿವೆ. ಈಕೆ ಹೋದಲ್ಲಿ ಬಂದಲ್ಲಿ ಸುದ್ದಿಯಾಗುತ್ತೆ. ಅವಳ ಹಿಂದೆ ವಿವಾದಗಳೂ ಕೂಡಾ ಗಸ್ತು ಹೊಡೆಯುತ್ತಲೇ ಇರುತ್ತವೆ. ಹಾಗಿರುವಾಗ ಬೆಂಗಳೂರಿಗೆ ಸನ್ನಿ ಕುಣಿಯಲು ಬರುತ್ತಾಳೆಂದಾಕ್ಷಣ ವಿವಾದವೇಳದೇ ಇರಬಹುದೇ? ಅದೇಕೋ ಸನ್ನಿ ಕುಣಿತವನ್ನು ಲೈವ್ ಆಗಿ ನೋಡೋ ಪಡ್ಡೆ ಕನಸಿಗೆ ಪದೇ ಪದೆ ಕಂಟಕಗಳೇ ಎದುರಾಗುತ್ತಿವೆ. ಈ ಬಾರಿ ಮಾನ್ಯತಾ ಟೆಕ್ ಪಾರ್ಕಿನಲ್ಲಿ ನಡೆಯೋ ರಘು ಧೀಕ್ಷಿತ್ ಕಾರ್ಯಕ್ರಮಕ್ಕೆ […]
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇತ್ತೀಚಿನ ದಿನಗಳಲ್ಲಿ ಗಾಯಕರಾಗಿಯೂ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಅವರು ಹಾಡಿದ ಹಾಡುಗಳು ಮಾತ್ರವಲ್ಲದೇ ಚಿತ್ರಗಳೂ ಗೆಲ್ಲುತ್ತವೆ ಎಂಬ ನಂಬಿಕೆಯೂ ಚಿತ್ರರಂಗದಲ್ಲಿ ಮನೆ ಮಾಡಿದೆ. ಇದೀಗ ಪುನೀತ್ ಅತ್ಯಂತ ಅಪರೂಪದ ಹಾಡೊಂದನ್ನು ಎಸ್.ಡಿ ಅರವಿಂದ್ ನಿರ್ದೇಶನದ ಮಟಾಶ್ ಚಿತ್ರಕ್ಕಾಗಿ ಹಾಡಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ತುಂಬಾ ಹರಡಿರುವ ಹವಾ ಸಣ್ಣದ್ದೇನಲ್ಲ! ಪುನೀತ್ ರಾಜ್ ಕುಮಾರ್ ಇದುವರೆಗೂ ನಾನಾ ಹಾಡುಗಳನ್ನು ಹಾಡಿದ್ದಾರೆ. ಆದರೆ ಉತ್ತರ ಕರ್ನಾಟಕ ಸೀಮೆಯ ಜವಾರಿ ಹಾಡನ್ನು […]
ಮೂರು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಚಿತ್ರ ಕನ್ನಡಕ್ಕಾಗಿ ಒಂದನ್ನು ಒತ್ತಿ. ತೆರೆಗೆ ಬಂದು ಹೋದ ಚಿತ್ರವನ್ನು ಮತ್ತೆ ಕನ್ನಡಿಗರ ಮನಸಿನ ಮೇಲೆ ಎತ್ತಿಟ್ಟಿರೋದು ಅದೇ ಸಿನಿಮಾ ಸುಮಧುರವಾದೊಂದು ಹಾಡು. ವಾಟ್ಸಪ್ ಸ್ಟೇಟಸ್ಗಳನ್ನು ಸಾರಾಸಗಟಾಗಿ ಆಕ್ರಮಿಸಿಕೊಂಡಿರೋ `ನನಗೀಗ ನನ ಮೇಲೆ ಅನುಮಾನ ಶುರುವಾಗಿದೆ’ ಎಂಬ ಹಾಡು ಯೂಟ್ಯೂಬ್ನಲ್ಲಿಯೂ ಟ್ರೆಂಡಿಂಗ್ನಲ್ಲಿದೆ! ಹೊಸದಾಗಿ ಬಿಡುಗಡೆಯಾಗಿರೋ ಹಾಡುಗಳನ್ನೂ ಹಿಂದಿಕ್ಕಿ ಅಚ್ಚರಿದಾಯಕವಾಗಿ ಈ ಹಾಡು ಮೋಡಿ ಮಾಡಿದೆ. ಯೂಟ್ಯೂಬ್ನಲ್ಲಿ ಏಕಾಏಕಿ ಮೂವತ್ತು ಲಕ್ಷ ಮೀರಿದ ವೀಕ್ಷಣೆ ಪಡೆದುಕೊಂಡಿರೋ ಈ ಹಾಡು ಹುಚ್ಚು ಹಿಡಿಸಿದೆ. ನೋಡ […]
ಎಲ್ಲೆಡೆ ಶಿವರಾಜ್ ಕುಮಾರ್ ಮತ್ತು ಸುದೀಪ್ ನಟಿಸಿರೋ ವಿಲನ್ ಚಿತ್ರಕ್ಕಾಗಿ ಕಾತರ ಶುರುವಾಗಿದೆ. ಈ ಚಿತ್ರ ಇದೇ ತಿಂಗಳ ೧೮ರಂದು ಬಿಡುಗಡೆಯಾಗಲಿದೆಯಲ್ಲಾ? ಇದೇ ದಿನ ಈ ಸಿನಿಮಾದ ಇಂಟರ್ವೆಲ್ನಲ್ಲಿ ರವಿಕಿರಣ್ ನಿರ್ದೇಶನದ ಗಿರಗಿಟ್ಲೆಯ ಟೀಸರ್ ಕೂಡಾ ಬಿಡುಗಡೆಯಾಗಲಿದೆ. ಈ ರೀತಿಯಲ್ಲಿ ವಿನೂತನವಾಗಿ ಟೀಸರ್ ಅನಾವರಣಗೊಳಿಸಲು ಚಿತ್ರತಂಡ ತಯಾರಾಗಿದೆ. ಆ ದಿನ ವಿಲನ್ ಚಿತ್ರ ಬಿಡುಗಡೆಯಾಗೋ ಎಲ್ಲ ಚಿತ್ರಮಂದಿರಗಳಲ್ಲಿಯೂ ಗಿರಗಿಟ್ಲೆಯ ಟೀಸರ್ ಬಿಡುಗಡೆಯಾಗಲಿದೆ. ಗಿರೀಶ್, ತಿಮ್ಮರಾಜು ಮತ್ತು ವೆಂಕಟೇಶ್ ಅವರುಗಳು ವೀರಾಂಜನೇಯ ಎಂಟರ್ಪ್ರೈಸಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ […]
ಪರಭಾಷಾ ನಟಿಯದ ಕೊಬ್ಬಿನ ಕಥೆಗಳು ಸಾಕಷ್ಟಿದ್ದರೂ ಅದೇಕೋ ಅಂಥವರಿಗೇ ಮಣೆ ಹಾಕೋ ಚಾಳಿ ಬೆಳೆದುಕೊಂಡಿದೆ. ಆರಂಭದಲ್ಲಿ ಬಳುಕುತ್ತಾ ಬರುವ ಇಂಥಾ ನಟಿಯರು ಆ ನಂತರ ಗುನ್ನ ಕೊಟ್ಟೇ ವಾಪಾಸುಹೋಗೋದೂ ಮಾಮೂಲು. ಸದ್ಯ ವಿಲನ್ ಚಿತ್ರದ ನಾಯಕಿ ಆಮಿ ಜಾಕ್ಸನ್ ಕೂಡಾ ಅಂಥಾದ್ದೇ ನಡವಳಿಕೆಯಿಂದ ಸುದ್ದಿಯಲ್ಲಿದ್ದಾಳೆ! ಆಮಿ ಜಾಕ್ಸನ್ ವಿಲನ್ ಚಿತ್ರದಲ್ಲಿ ಸುದೀಪ್ ಅವರಿಗೆ ನಾಯಕಿಯಾಗಿ ನಟಿಸಿದ್ದಾಳೆ. ಆದರೆ ಇಷ್ಟು ದೊಡ್ಡ ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿದ್ದರೂ ಕೂಡಾ ಈಕೆ ಪ್ರಮೋಶನ್ಗೂ ತನಗೂ ಸಂಬಂಧವೇ ಇಲ್ಲದಂತಿದ್ದಾಳೆಂಬುದು ನಿರ್ದೇಶಕ ಪ್ರೇಮ್ […]
ಇಂದು ಕನ್ನಡ ಚಿತ್ರರಂದ ಪಾಲಿಗೆ ಸರಣಿ ದುಃಖದ ದಿನ. ಗಂಟಲು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಛಾಯಾಗ್ರಾಹಕ ವಿಷ್ಣುವರ್ಧನ್ ಸಾವಿನ ಸುದ್ದಿ ಹೊರ ಬಿದ್ದ ಬೆನ್ನಿಗೇ, ಕನ್ನಡ ಚಿತ್ರರಂಗದ ಅಮೂಲ್ಯ ಕೊಂಡಿಯಂತಿದ್ದ ಪ್ರೊಡಕ್ಷನ್ ಮ್ಯಾನೇಜರ್ಮೀಸೆ ಪಾಪಣ್ಣ ನಿಧನರಾದ ಸುದ್ದಿ ಬಂದಿದೆ. ಮೀಸೆ ಪಾಪಣ್ಣ ನಾಗೇಶ್ ಕೋಗಿಲು ನಿರ್ಮಾಣದ ಟಕ್ಕರ್ ಚಿತ್ರಕ್ಕೂ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದವರು. ವಯಸ್ಸು ಎಪ್ಪತೈದರ ಗಡಿ ದಾಟಿದರೂ ಉತ್ಸಾಹದಿಂದಲೇ ಕಾರ್ಯ ನಿರ್ವಹಿಸುತ್ತಿದ್ದ ಮೀಸೆ ಪಾಪಣ್ಣ ಇಡೀ ಚಿತ್ರರಂಗದ ಪ್ರೀತಿ ಪಾತ್ರರಾಗಿದ್ದವರು. ಪಾಪಣ್ಣರ ಅನಿರೀಕ್ಷಿತ […]
ಯಾರೋ ಕಂಡ ಕನಸನ್ನು ಕೂಡಾ ನನಸು ಮಾಡಿಕೊಡುತ್ತಿದ್ದ ಆ ಕಣ್ಣುಗಳು ಶಾಶ್ವತವಾಗಿ ಮುಚ್ಚಿ ಮಲಗಿವೆ. ಛಾಯಾಗ್ರಾಹಕ ಕೆ.ಎಂ. ವಿಷ್ಣುವರ್ಧನ್ ವಿಧಿವಶರಾಗಿದ್ದಾರೆ. ಕಳೆದ ಏಳೆಂಟು ತಿಂಗಳಿನಿಂದ ಬಾಧಿಸುತ್ತಿದ್ದ ಕ್ಯಾನ್ಸರ್ ಮಾರಿ ಅವರನ್ನು ಬಲಿ ತೆಗೆದುಕೊಂಡಿದೆ. ತುಮಕೂರಿನ ಕುದೂರು ಮೂಲದ ವಿಷ್ಣುವರ್ಧನ್ ಎಸ್.ಜೆ. ಪಾಲಿಟೆಕ್ನಿಕ್ ಕಾಲೇಜಿನ 1991-93ರ ಬ್ಯಾಚ್’ನಲ್ಲಿ ಛಾಯಾಗ್ರಹಣ ತರಬೇತಿ ಪಡೆದವರು. ನಂತರ ವಿಷ್ಯುಯಲ್ ವರ್ಲ್ಡ್ ಎಂಬ ವಿಡಿಯೋ ಕಾರ್ಪೊರೇಟ್ ಸಂಸ್ಥೆಯಲ್ಲಿ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಪ್ರಾರಂಭಿಸಿದ್ದರು. ಆದರೆ ಸಿನಿಮಾ ಛಾಯಾಗ್ರಾಹಕರಾಗಬೇಕೆನ್ನುವ ತುಡಿತದಿಂದ ಇದ್ದ ಕಾರ್ಪೊರೇಟ್ ಕೆಲಸವನ್ನು ಬಿಟ್ಟುಬಂದು […]
ಅಂಬಿ ನಿಂಗೆ ವಯಸಾಯ್ತೋ ಚಿತ್ರದ ಯಶಸ್ಸಿನ ಓಟ ಅಡೆತಡೆಯಿಲ್ಲದೆ ಮುಂದುವರೆದಿದೆ. ಅತ್ತ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರೋ ಈ ಚಿತ್ರವನ್ನು ಸ್ಯಾಂಡಲ್ವುಡ್ ತಾರೆಯರೆಲ್ಲ ಸರದಿಯೋಪಾದಿಯಲ್ಲಿ ನೋಡುತ್ತಿದ್ದಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರೂ ಕೂಡಾ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ವಾರದ ಹಿಂದೆಯೇ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ನೋಡಲು ಕಾತರರಾಗಿರೋದಾಗಿ ಪುನೀತ್ ಹೇಳಿಕೊಂಡಿದ್ದರು. ಇದೀಗ ಕಡೆಗೂ ಈ ಚಿತ್ರವನ್ನು ನೋಡಿರುವ ಪವರ್ಸ್ಟಾರ್ ಖುಷಿಗೊಂಡಿದ್ದಾರೆ. ಅವರು ಅಪಾರವಾಗಿ ಗೌರವಿಸೋ ಅಂಬರೀಶ್ ಅವರ ನಟನೆಯನ್ನು ಕೊಂಡಾಡಿದ್ದಾರೆ. ನಿರ್ದೇಶಕ ಗುರುದತ್ತ ಗಾಣಿಗ […]
ವಿಜಯ್ ಸೂರ್ಯ ನಿರ್ದೇಶನದ ಎ ಪ್ಲಸ್ ಚಿತ್ರ ತೆರೆ ಕಂಡಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಗರಡಿಯಲ್ಲಿ ಪಳಗಿರುವ ವಿಜಯ್ ಟ್ರೈಲರ್ ಮೂಲಕವೇ ಒಂದಷ್ಟು ಕ್ರೇಜ್ ಹುಟ್ಟು ಹಾಕೋ ಪ್ರಯತ್ನ ಮಾಡಿದ್ದರು. ಅದರ ಒಡ್ಡೋಲಗದಲ್ಲಿ ತೆರೆ ಕಂಡಿರೋ ಈ ಚಿತ್ರ ಪ್ರೀತಿ, ಮೋಸ, ದ್ವೇಷ ಸೇರಿದಂತೆ ಎಲ್ಲವೂ ಅಡಕವಾಗಿರೋ ಕಥೆಯೊಂದನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ. ಒಂದಷ್ಟು ಹೊಸತನ ಮತ್ತು ಲೀಲಾಜಾಲ ನಿರೂಪಣೆಯಿಂದಾಗಿ ಈ ಚಿತ್ರ ಒಂದು ಹೊಸಾ ಅನುಭವದೊಂದಿಗೆ ಪ್ರೇಕ್ಷಕರನ್ನು ಮುದಗೊಳಿಸಿದೆ. ನಾಯಕ ತನ್ನ ಗುರುವಿನ ಕುಟುಂಬವನ್ನು […]
ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರವೀಗ ಹಾಡುಗಳ ಹಂಗಾಮದಿಂದ ಮತ್ತಷ್ಟು ಪ್ರೇಕ್ಷಕರನ್ನು ತಲುಪಲಾರಂಭಿಸಿದೆ. ಅಜೇಯ್ ರಾವ್ ಹೊಸಾ ಗೆಟಪ್ಪಿನಲ್ಲಿ ನಟಿಸಿರೋ, ಜೂಡಾ ಸ್ಯಾಂಡಿ ಸಂಗೀತ ನೀಡಿರುವ ಈ ಚಿತ್ರದ ಮತ್ತೊಂದು ಹಾಡೀಗ ಬಿಡುಗಡೆಗೊಂಡಿದೆ. ಈಗ ಬಿಡುಗಡೆಯಾಗಿರೋ ಅಮ್ಮ ನಿನ್ನ ಮಗನೆಂಬ ಹೆಮ್ಮೆ.. ಅಮ್ಮ ನಿನ್ನ ಮಡಿಲಲ್ಲಿ ಜಾಗ ನೀಡು ನನಗೆ ಪ್ರತಿ ಜನ್ಮಕೂ… ಎಂಬ ಈ ಹಾಡೂ ಈ ಹಿಂದಿನ ಎರಡು ಹಾಡುಗಳನ್ನೇ ಮೀರಿಸುವಂತೆ ಹಿಟ್ ಆಗೋ ಸೂಚನೆಯೂ ದಟ್ಟವಾಗಿಯೇ ಕಾಣಿಸುತ್ತಿದೆ. ಅಮ್ಮನ ಮೇಲಿನ ಪ್ರೀತಿಯ ಪ್ರತೀಕದಂತಿರೋ […]