ಇದು ಪಕ್ಕಾ ಈ ದಿನಮಾನದ ಕಾಲೇಜು ಹುಡುಗರ ಮನಸ್ಥಿತಿಗೆ ಕನ್ನಡಿ ಹಿಡಿದಂಥಾ ಚಿತ್ರ. ಕಿಸಿಂಗ್ ಸೀನಿನ ಫೋಟೋ ಮೂಲಕವೇ ಭಾರೀ ಸದ್ದು ಮಾಡಿದ್ದ ಆದಿಪುರಾಣ ಕಿಸ್ಸಿನ ಸುತ್ತಲೇ ಹರಡಿಕೊಂಡಂತಿರೋ ಯುವ ಬಾಧೆಯ ಕಥಾನಕವನ್ನು ಹೊತ್ತು ತಂದಿದೆ. ಬಹುಶಃ ಈ ಕಾರಣದಿಂದಲೇ ಈ ಚಿತ್ರ ಯುವ ಸಮುದಾಯಕ್ಕೆ ಹತ್ತಿರಾಗೋ ಸೂಚನೆಗಳೂ ಕಾಣಿಸುತ್ತವೆ. ಇದು ಆದಿ ಎಂಬೊಬ್ಬ ಹುಡುಗನ ಸುತ್ತಲೇ ಹರಡಿಕೊಂಡಿರೋ ಕಥೆ. ಆದರೆ ಅದರ ಆಚೀಚೆಗೆ ಯುವ ಮನಸುಗಳ ಮನೋಲೋಕವನ್ನೂ ಬಿಚ್ಚಿಡುತ್ತಾ ಸಾಗೋ ಆದಿಪುರಾಣ ಅಂತ್ಯವಾಗೋ ಹೊತ್ತಿಗೆ ಕಾಲೇಜು […]
ಖಡಕ್ ಪೊಲೀಸ್ ಅಧಿಕಾರಿಗಳ ಕಥೆ ಸಿನಿಮಾವಾದ ಉದಾಹರಣೆ ಕನ್ನಡ ಚಿತ್ರರಂಗದಲ್ಲಿಯೇ ಸಾಕಷ್ಟಿದೆ. ಇದೀಗ ಕಣ್ಣೆದುರೇ ಕಾರ್ಯ ನಿರ್ವಹಿಸುತ್ತಿರುವ, ಸಾರ್ವಜನಿಕರ ಕಣ್ಣಲ್ಲಿ ಹೀರೋಗಳಾಗಿ ನೆಲೆಯಾಗಿರುವ ಒಂದಷ್ಟು ಅಧಿಕಾರಿಗಳತ್ತ ಚಿತ್ರರಂಗದ ಮಂದಿಯ ಕಣ್ಣು ನೆಟ್ಟಿದೆ. ಅತ್ತ ರವಿ ಚನ್ನಣ್ಣನವರ್ ಜೀವನಗಾಥೆ ಚಿತ್ರ ರೂಪ ಪಡೆಯೋ ತಯಾರಿಯಲ್ಲಿರೋವಾಗಲೇ, ಇದೀಗ ಸಿಸಿಬಿಗೆ ಹೆಚ್ಚುವರಿ ಆಯುಕ್ತಾರಾಗಿ ಅಬ್ಬರಿಸುತ್ತಿರುವ ಅಲೋಕ್ ಕುಮಾರ್ ಬಗೆಗೂ ಒಂದು ಸಿನಿಮಾ ತಯಾರಾಗಲಿದೆ ಎಂಬ ಸುದ್ದಿ ಹಬ್ಬಿಕೊಂಡಿದೆ. ಪೊಲೀಸ್ ಅಧಿಕಾರಿಯಾಗಿ ಪ್ರತೀ ಹಂತದಲ್ಲಿಯೂ ಜನಸ್ನೇಹಿಯಾಗಿಯೇ ಗುರಿತಿಸಿಕೊಂಡು ಬಂದವರು ಅಲೋಕ್ ಕುಮಾರ್. ಯಾವುದೇ […]
ಅಕ್ಟೋಬರ್ ೮ರಿಂದ ರಾತ್ರಿ ೭.೩೦ಕ್ಕೆ ಮನರಂಜನಾಕ್ಷೇತ್ರದ ಬದಲಾದ ಸನ್ನಿವೇಶದಲ್ಲಿಕಿರುತೆರೆಯೂ ಹಿರಿತೆರೆಯಷ್ಟು ಶ್ರೀಮಂತವಾಗಿದೆ. ವಿನೂತನಕಥೆ, ನಿರೂಪಣೆಗಳ ಜತೆಗೆಅದ್ಧೂರಿ ನಿರ್ಮಾಣಕ್ಕೂ ಹೆಚ್ಚಿನಒತ್ತು ನೀಡಲಾಗುತ್ತಿದೆ. ಈ ದಿಸೆಯಲ್ಲಿಕನ್ನಡ ಮನರಂಜನಾ ವಾಹಿನಿಗಳ ಹಿರಿಯಣ್ಣ ಉದಯ ಟಿವಿ ‘ಜೈ ಹನುಮಾನ್’ ಎಂಬ ಅದ್ಧೂರಿಧಾರಾವಾಹಿಯನ್ನುಕನ್ನಡದ ವೀಕ್ಷಕರಿಗೆ ನೀಡಲು ಸಿದ್ಧತೆ ನಡೆಸಿದೆ. ಅಕ್ಟೋಬರ್೮ ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತೀ ದಿನ ರಾತ್ರಿ ೭.೩೦ಕ್ಕೆ ಜೈ ಹನುಮಾನ್ಉದಯ ಟಿವಿಯಲ್ಲಿಪ್ರಸಾರವಾಗಲಿದೆ. ಈಗಾಗಲೇ ಪ್ರೋಮೋಗಳು ಪ್ರೇಕ್ಷಕರ ಮನಸೂರೆಗೊಂಡಿದ್ದು, ಸೋಶಿಯಲ್ ಮೀಡಿಯಾಗಳಲ್ಲೂ ಹವಾ ಸೃಷ್ಟಿಸಿದೆ. ಎಲ್ಲ ವಯೋಮಾನದ ವೀಕ್ಷಕರಿಗೂಇಷ್ಟವಾಗುವಂಥಕಥೆ, ನಿರೂಪಣೆ ಹಾಗೂ ಕಣ್ಮನ […]
ನಟಿ ಕಾರುಣ್ಯಾ ರಾಮ್ ಮತ್ತೆ ಸುದ್ದಿಯಾಗಿದ್ದಾಳೆ. ಹಾಗಂತ ಆಕೆ ಯಾವ ಚಿತ್ರಕ್ಕೂ ನಾಯಕಿಯಾಗಿಲ್ಲ. ಯಾವ ಚಿತ್ರದಲ್ಲಿಯೂ ನಟಿಸುತ್ತಿರೋ ಸೂಚನೆಯೂ ಇಲ್ಲ. ಆದರೂ ಈಕೆ ಸುದ್ದಿಯಾಗಿರೋದು ವೈಯಕ್ತಿಕ ಜೀವನದ ಅಸ್ತವ್ಯಸ್ತ ಸ್ಥಿತಿಯಿಂದಲೇ. ಖುದ್ದು ಕಾರುಣ್ಯಾ ತನ್ನ ಲವರ್ ಸಚಿನ್ ಯಾದವ್ ಮೇಲೊಂದು ಕೇಸು ದಾಖಲಿಸಿದ್ದಾಳೆ. ಈ ವಿಚಾರವೀಗ ಕಮಿಷನರ್ ಕಚೇರಿವರೆಗೂ ತಲುಪಿಕೊಂಡಿದೆ. ಈ ಸಚಿನ್ ಯಾದವ್ ಈ ಹಿಂದೆ ಕಿರುತೆರೆ ನಟಿ ಅನಿಕಾ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡು ಇನ್ನೇನು ಹಸೆಮಣೆ ಏರಲು ರೆಡಿಯಾಗಿದ್ದ ಹುಡುಗ. ಕಡೇ ಕ್ಷಣದಲ್ಲಿ ಎಂಟ್ರಿ […]
ಕಲಾಕೃತಿಯಂಥಾ ಸಿನಿಮಾ ಸ್ಟಿಲ್ ಫೋಟೋಗ್ರಫಿಯಿಂದ ಖ್ಯಾತರಾಗಿದ್ದ ಭುವನ್ ಗೌಡ ಈಗ ಛಾಯಾಗ್ರಾಹಕರಾಗಿಯೂ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಭುವನ್ ಭರ್ಜರಿ ಚೇತನ್ ನಿರ್ದೇಶನದ ಭರಾಟೆ ಚಿತ್ರಕ್ಕೂ ಛಾಯಾಗ್ರಾಹಕರಾಗಿ ಆಯ್ಕೆಯಾಗೋ ಮೂಲಕ ಶ್ರೀಮುರಳಿಗೆ ಮೂರನೇ ಚಿತ್ರದಲ್ಲಿಯೂ ಒಂದಾಗಿದ್ದರು. ಆದರೀಗ ಭರಾಟೆಯಿಂದ ಭುವನ್ ಗೌಡ ಹೊರ ಬಂದಿದ್ದಾರೆಂಬ ಸುದ್ದಿ ಬಂದಿದೆ! ಭುವನ್ ಗೌಡ ಭರಾಟೆ ಚಿತ್ರದ ಛಾಯಾಗ್ರಹಣದಿಂದ ಏಕಾಏಕಿ ಹೊರ ಬಿದ್ದ ಸುದ್ದಿ ಕೇಳಿ ಬಹುತೇಕರು ಅಚ್ಚರಿಗೊಂಡಿದ್ದಾರೆ. ಈ ಮೂಲಕ ಚಿತ್ರರಂಗದಲ್ಲಿ ಇತ್ತೀಚೆಗೆ ಹುಟ್ಟಿಕೊಂಡಿರೋ ಛಾಯಾಗ್ರಾಹಕರನ್ನು ಬದಲಾಯಿಸೋ ಟ್ರೆಂಡ್ ಒಂದು ಮುಂದುವರೆದಂತಾಗಿದೆ. ತಿಂಗಳುಗಳ […]
‘೧೭೯೫ರ ಕಾಲಘಟ್ಟ’ ಎಂದು ಕತ್ತಲಲ್ಲಿ ಶುರುವಾಗುವ ಟ್ರ್ರೈಲರ್ನಲ್ಲಿ ಬುಲೆಟ್ಟುಗಳ ಮಳೆ, ಬೆಂಕಿಯ ನಾಲಿಗೆಗೆ ಬೆದರಿ ಓಡುವ ಭಾರತೀಯರು. ಗಾಳಿಯಲ್ಲಿ ಖಡ್ಗ ತೂರಿ ಕೈಲಿ ಹಿಡಿಯುತ್ತ ಸಮರಕಲಿಯಂತೆ ಬ್ರಿಟಿಷರ ವಿರುದ್ಧ ರೋಷಾಗ್ನಿ ಉಗುಳುವ ಅಮಿತಾಬ್, ಪರಂಗಿಗಳಿಗೆ ಸಿಂಹಸ್ವಪ್ನವಾಗುವ ಅಜಾದ್, ಬ್ರಿಟಿಷರ ಏಜೆಂಟನಾಗಿ ಅಮಿತಾಬ್ ಗುಂಪಿಗೆ ಸೇರುವ ದೋಖೆಬಾಜ್, ಪುಡಿಗಳ್ಳ ಅಮೀರ್….. ಬೆಂಕಿ, ಬುಲೆಟ್ಟುಗಳ ನಡುವೆ ಪಡ್ಡೆಗಳ ಎದೆಗೆ ಕಿಚ್ಚುಹಚ್ಚುವ ಸಪೂರ ಸೊಂಟದ ಸುಂದರಿ ಕತ್ರೀನಾ….. ೩.೩೮ ನಿಮಿಷಗಳ ಟ್ರೈಲರ್ನಲ್ಲಿ ನಮಗೆ ದಕ್ಕುವ ಚಿತ್ರಕತೆಯ ಎಳೆ ಇಷ್ಟು. ಈ ಕಾರಣಕ್ಕೇ […]
ಅನೀಶ್ ತೇಜೇಶ್ವರ್ ನಟನೆಯ ಕೇಡಿ ನಂ ೧ ಚಿತ್ರಕ್ಕೀಗ ಬಿರುಸಿನ ತಯಾರಿಗಳು ಆರಂಭವಾಗಿವೆ. ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ ಚೊಚ್ಚಲ ನಿರ್ದೇಶನದ ಈ ಚಿತ್ರದ ತಾರಾಗಣದ ಆಯ್ಕೆ ಕಾರ್ಯವೀಗ ಬಿರುಸಿನಿಂದ ನಡೆಯುತ್ತಿದೆ. ಅದರಲ್ಲಿಯೂ ಈ ಚಿತ್ರದ ನಾಯಕಿಯ ಆಐಕೆ ವಿಚಾರದಲ್ಲಿ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಚಿತ್ರತಂಡ ತೀರ್ಮಾನಿಸಿಯದೆ. ನಾಯಕಿಯ ಆಯ್ಕೆಗಾಗಿಯೇ ಆಡಿಷನ್ ಒಂದನ್ನು ಆಯೋಜಿಸಲಾಗಿದೆ. ಹದಿನೆಂಟರಿಂದ ಇಪ್ಪತೈದು ವರ್ಷದೊಳಗಿನ ಯುವತಿಯರು ತಮ್ಮ ಭಾವ ಚಿತ್ರದೊಂದಿಗೆ [email protected] ವಿವರಗಳನ್ನು ಕಳಿಸುವ ಮೂಲಕ ಈ ಆಡಿಷನ್ನಿಗೆ ಪ್ರವೇಶ ಪಡೆಯ ಬಹುದಾಗಿದೆ. ಇದೇ […]
ರಚಿತಾ ರಾಮ್ ಈ ವರೆಗೂ ಕಮರ್ಷಿಯಲ್ ಚಿತ್ರಗಳ ಮೂಲಕವೇ ಗುರುತಿಸಿಕೊಂಡು ಬಂದಿರುವವರು. ಸೀರಿಯಲ್ ಲೋಕದಲ್ಲಿ ಸಣ್ಣಗೆ ಸದ್ದು ಮಾಡುತ್ತಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸೋ ಮೂಲಕ ಅಚ್ಚರಿಗೆ ಕಾರಣವಾಗಿದ್ದವರು. ಆ ನಂತರದಲ್ಲಿ ಈವರೆಗೂ ಅವರ ಸಿನಿಮಾ ಯಾತ್ರ ಕಮರ್ಷಿಯಲ್ ಪಥದಲ್ಲಿಯೇ ಮುಂದುವರೆಯುತ್ತಾ ಬಂದಿತ್ತು. ಕೈ ತುಂಬಾ ಅವಕಾಶಗಳಿರೋ ಹೊತ್ತಿನಲ್ಲಿಯೂ ಅವರನ್ನು ಕಾಡಿದ ಬದಲಾವಣೆಯ ಬಯಕೆಯಿಂದಲೇ ಏಪ್ರಿಲ್ ಚಿತ್ರದಲ್ಲಿನ ಭಿನ್ನವಾದ ಪಾತ್ರವೊಂದು ಅವರಿಗೆ ಸಿಕ್ಕಿದೆ! ಏಪ್ರಿಲ್ ಎಂಬುದು ಕಮರ್ಷಿಯಲ್ ಸೂತ್ರದಾಚೆಗಿನ ಬೇರೆಯದ್ದೇ ಜಾಡಿನ ಚಿತ್ರ. […]
ವರ್ಷದ ಹಿಂದೆ ತೆರೆ ಕಂಡಿದ್ದ ಒನ್ಸ್ ಮೋರ್ ಕೌರವ ಚಿತ್ರದ ನಾಯಕನಾಗಿ ನಟಿಸಿದ್ದವರು ನರೇಶ್ ಗೌಡ. ಒಟ್ಟಾರೆ ಚಿತ್ರದ ಏಳುಬೀಳಿನಾಚೆಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಒಳ್ಳೆ ನಟನಾಗಿ ರೂಪುಗೊಳ್ಳುತ್ತಾರೆಂಬ ಭರವಸೆಯನ್ನಂತೂ ನರೇಶ್ ಹುಟ್ಟಿಸಿದ್ದರು. ಆದರೆ, ಆ ನಂತರದಲ್ಲಿ ಸದ್ದಿಲ್ಲದಂತಿದ್ದ ನರೇಶ್ ಗೌಡ ಈಗೇನು ಮಾಡುತ್ತಿದ್ದಾರೆ? ಅವರ ಮುಂದಿನ ನಡೆಯೇನು ಎಂಬ ಪ್ರಶ್ನೆಗಳಿಗೆ ಅವರೇ ಉತ್ತರವಾಗಿದ್ದಾರೆ. ನಾಯಕನಾಗಿ ಎಂಟ್ರಿ ಕೊಟ್ಟ ಮೊದಲ ಚಿತ್ರದಲ್ಲಿಯೇ ಯಾವತ್ತೂ ಮರೆಯದ ಒಂದಷ್ಟು ಪಾಠಗಳನ್ನು ಕಲಿತಿರೋ ನರೇಶ್ ಎಲ್ಲ ನಿರಾಸೆಗಳನ್ನೂ ಕೊಡವಿಕೊಂಡು ಮೇಲೆದ್ದು ನಿಲ್ಲಲು […]
ರೋಲಿಂಗ್ ಡ್ರೀಮ್ಸ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರವೀಣ್ರಾಜ್ ಹಾಗೂ ವಿ.ವಿ.ಎನ್.ವಿ ಸುರೇಶ್ಕುಮಾರ್ ಅವರು ನಿರ್ಮಿಸಿರುವ ‘ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ‘ ಚಿತ್ರದ ಟ್ರೇಲರ್ ಕಿಚ್ಚ ಸುದೀಪ್ ಅವರಿಂದ ಇತ್ತೀಚೆಗೆ ಬಿಡುಗಡೆಯಾಯಿತು. ಶ್ರೀನಾಗ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸಿರುವ ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಮುಂದೆ ಹೋಗಲಿದೆ. ಶೀಘ್ರದಲ್ಲೇ ಚಿತ್ರದ ಹಾಡುಗಳು ಬಿಡುಗಡೆಯಾಗಲಿದ್ದು, ಚಿತ್ರ ಕೂಡ ಸದ್ಯದಲ್ಲೇ ತೆರೆ ಕಾಣಲಿದೆ. ಕಿರಣ್ ವಾರಣಾಸಿ ಅವರ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕಲ್ಯಾಣ್ ಸಮಿ ಅವರ ಛಾಯಾಗ್ರಹಣವಿದೆ. ವಿ.ಸುರೇಶ್ಕುಮಾರ್ […]